Saturday, April 11, 2020

ಕೈಲಾಸ ಯಾತ್ರೆಯ ಮಾಡಿದೆ ಎಂದು ಏಕೆ ನೀನು ಮೆರೆವೆ?

ಕೈಲಾಸ ಯಾತ್ರೆಯ ಮಾಡಿದೆ ಎಂದು ಏಕೆ ನೀನು ಮೆರೆವೆ
ಮೆರೆಯುವುದನ್ನ ಬಿಟ್ಟರೆ ನೀನು ಆ ಕೈಲಾಸವ ಸೇರುವೆ

ತಿಮ್ಮಪ್ಪನಿಗೆ ಕೋಟಿ ದಾನ ಮಾಡಿದೆಯೆಂದು ಏಕೆ ಸೊಕ್ಕು
ಹಸಿದೊಂದು ಹೊಟ್ಟೆಗೆ ಅನ್ನದಾನ  ಮಾಡಿ ನೀನು ವೈಕುಂಠ ಹೊಕ್ಕು
ಕೈಲಾಸ ಯಾತ್ರೆಯ...

ಹತ್ತಾರು ಜನರನು ಕೊಂದು ನೀನು ಆಗಬೇಕೆನ್ನುವೆ ಹುತಾತ್ಮ
ಕರ್ಮಯೋಗಿಯಾಗಿ ನೀನು ಕಾಯಕದಿಂದಾಗು ಪರಮಾತ್ಮ
ಕೈಲಾಸ ಯಾತ್ರೆಯ...

No comments:

Post a Comment