Wednesday, August 28, 2019

ಕೋಟೆ ಮಾರಮ್ಮ ಪಾಲಯಮಾಂ - ಜಂಬೂರು ಕೋಟೆ ಮಾರಮ್ಮನಿಗೆ ಗೀತಾರ್ಪಣೆ


ಶ್ರೀ ಕೋಟೆ ಮಾರಾಮ್ಮ ಪಾಲಯಮಾಂ
ತ್ರಿಮಾತೃಕ ಸಹೋದರಿ... ಅಮ್ಮಾ...
ಶ್ರೀ ಕೋಟೆ ಮಾರಮ್ಮ ಪಾಲಯಮಾಂ

ಗಂಗಮತಸ್ತ ಆರಾಧ್ಯ ದೇವತೆ (೨)
ಚತುರ್ವರ್ಣಾಲಂಕೃತೆ... ಶೀತಲೇ...

ಸರೋವರತಟಾಕ ವಾಸಿನಿ (ಅಮ್ಮ) (೨)
ಸುವರ್ಷ ಸಂಪತ್ತ್ ಪ್ರದಾಯಿನಿ... ಸುನಯನೀ...

ಚಂಪಕ ಪುಷ್ಪ ಸುಪೂಜಿತೆ (೨)
ಜಂಬೂರು ಗ್ರಾಮಸ್ಥಿತೆ...
ಕರ್ಮಯೋಗಿ ಸುಪ್ರೀತೇ
ಸದಾ ನಮಸ್ತೆ....

ಪಾಪಿಗಳ ಸೌಭಾಗ್ಯ - ಹರಿಭಜನೆ



ಏನು ಹಾಡಲಿ ಪಾಪಿಗಳ ಸೌಭಾಗ್ಯ, ಪುಣ್ಯವಂತರಿಗಿಂತ ಪಾಪಿಯಾಗುವುದೇ ಲೇಸು (೨)

ಪುಣ್ಯವಂತನಾದ ಸುಧಾಮನು ನಿನ್ನ್ ಮನೆಗೆ ನಡೆದು ಬಂದನು (೨)
ನೀ ಲಂಕೆಯವರೆಗೆ ನಡೆದು ಹೋದ ರಾವಣನ ಸೌಭಾಗ್ಯ ಏನು ಹೇಳಲಿ?

ಪುಣ್ಯವಂತಳಾದ ಯಶೋಧೆಯು ನಿನ್ನನ್ನು ಮಡಿಲಲ್ಲಿ ಮುದ್ದಾಡಿದಳು (೨)
ನೀನೆ ಎತ್ತಿ ಮಡಿಲಲ್ಲಿ ಮಲಗಿಸಿಕೊಂಡ ಹಿರಣ್ಯನ ಸೌಭಾಗ್ಯ ಏನು ಹೇಳಲಿ?

ಪುಣ್ಯವಂತನಾದ ಪಾರ್ಥನು ವಿಶ್ವರೂಪವನ್ನು ರಣರಂಗದಲಿ ಕಂಡ (೨)
ಸಭೆಯೊಳಗೇ ಅದನು ಕಂಡ ಕೌರವೇಶ್ವರನ ಸೌಭಾಗ್ಯ ಏನು ಹೇಳಲಿ?

(೪)
ಪುಣ್ಯವಂತರಾದ ಭಕ್ತರಿಗೆ ಮೋಕ್ಷವನ್ ನೀ ಅನುಗ್ರಹಿಸುವೆ (೨)
ಕಾಯಕದಲಿ ಕೈಲಾಸ ಕಾಣುವ ಕರ್ಮಯೋಗಿಯ ಸೌಭಾಗ್ಯ ಏನು ಹೇಳಲಿ

Edited to fit Roopaka taala (ರೂಪಕ ತಾಳಕ್ಕೆ ಅನುಬದ್ಧವಾದ ಸಾಹಿತ್ಯ)
ಏನು ಹೇಳಲಿ ನಾನು ಪಾಪಿಗಳ ಸೌಭಾಗ್ಯ 
ಪುಣ್ಯವಂತರಿಗಿಂತ ಪಾಪಿಯಾಗುವುದೇ ಲೇಸು 

ಪುಣ್ಯಾತ್ಮ ಸುಧಾಮ
ತಾನೇ ನಡೆದು ಬಂದ
ನೀನೇ ನಡೆದು ಹೋದ 
ಲಂಕೇಶ್ವರನೇ ಧನ್ಯ 

ಪುಣ್ಯ ಮಾತೆ ಯಶೋದೆ 
ನಿನ್ನ ಮಡಿಲಲ್ಲೆತ್ತಿದಳು 
ನಿನ್ನ ಮಡಿಲಲಿ ಮಲುಗಿದ   
ಆ ಹಿರಣ್ಯನೇ ಬಹು ಧನ್ಯ

ಪಾರ್ಥನಿಗೆ  ರಣದಲ್ಲಿ 
ದಿವ್ಯದರ್ಶನವಾಯ್ತು 
ಸಭೆಯೊಳಗೆ ಅದ ಕಂಡ
ಕೌರವೇಶ್ವರನೇ ಧನ್ಯ 

ಪುಣ್ಯವಂತರಿಗೆ ನೀನು 
ಮೋಕ್ಷವನು ನೀಡುವೆಯೋ  
ಕಾಯಕವನೇ ಪೂಜಿಸುವ  
ಕರ್ಮಯೋಗಿಗಳೇ ಧನ್ಯ