Sunday, April 19, 2020

ಉಗಾಭೋಗ

ವೇಣುವಿನಲಿ
ನಾದ ಸುಗಂಧ ತುಂಬಿ ತುಳುಕುತಿರಲು...
ಬೆರಳಾಟದಿಂದನು
ಪ್ರಚೋದಿಸುವನೋರ್ವ ಬೇಕಿದ್ದ

ರಾಧಿಕೆಯ ಮನಸಿನಂಗಳದಲಿ
ಒಲವಿನಾರು ರಸಗಳಿರಲು
ಕಣ್ಮಿಡಿತದಿಂದ
ರಸದೌತಣವನೀವನೋರ್ವ ಬೇಕಿದ್ದ

ಪಾರ್ಥನಲಿ
ಛಲೋರುವಲು ಅಣಿಯಾಗಿರಲು
ನುಡಿಯಾಟದಿಂದಕೆ
ಕಿಡಿಯನಿಡುವನೋರ್ವ ಬೇಕಿದ್ದ

ಮನುಜರಲಿ
ಅರಿವಿನೇಳು ಸ್ವರಗಳಿರಲು
ಗೀತಮಾಲೆಯ ಪೋಣಿಸಿ
ಕರ್ಮಯೋಗಿಗಳಾಗಿಸುವನೋರ್ವ ಬೇಕಿದ್ದ

Saturday, April 11, 2020

ಕೈಲಾಸ ಯಾತ್ರೆಯ ಮಾಡಿದೆ ಎಂದು ಏಕೆ ನೀನು ಮೆರೆವೆ?

ಕೈಲಾಸ ಯಾತ್ರೆಯ ಮಾಡಿದೆ ಎಂದು ಏಕೆ ನೀನು ಮೆರೆವೆ
ಮೆರೆಯುವುದನ್ನ ಬಿಟ್ಟರೆ ನೀನು ಆ ಕೈಲಾಸವ ಸೇರುವೆ

ತಿಮ್ಮಪ್ಪನಿಗೆ ಕೋಟಿ ದಾನ ಮಾಡಿದೆಯೆಂದು ಏಕೆ ಸೊಕ್ಕು
ಹಸಿದೊಂದು ಹೊಟ್ಟೆಗೆ ಅನ್ನದಾನ  ಮಾಡಿ ನೀನು ವೈಕುಂಠ ಹೊಕ್ಕು
ಕೈಲಾಸ ಯಾತ್ರೆಯ...

ಹತ್ತಾರು ಜನರನು ಕೊಂದು ನೀನು ಆಗಬೇಕೆನ್ನುವೆ ಹುತಾತ್ಮ
ಕರ್ಮಯೋಗಿಯಾಗಿ ನೀನು ಕಾಯಕದಿಂದಾಗು ಪರಮಾತ್ಮ
ಕೈಲಾಸ ಯಾತ್ರೆಯ...