ಕ್ಷೇತ್ರಕ್ಕೆ ಬರಬೇಡಿರಯ್ಯ
ಸ್ವಾಮಿಯೊಡನೆ ವ್ಯವಹಾರವಿದ್ದರೆ
ಕ್ಷೇತ್ರಕ್ಕೆ ಬರಬೇಡಿರಯ್ಯ
1...
ಕೆರೆಯ ನೀರನ್ನೇ ಕೆರೆಗೆ ಚೆಲ್ಲಿ
ಸಾಧಿಸಿದ್ದಾದರೂ ಎನು?
ಹರಕೆ ಹೊತ್ತು ಕರವ ಮುಗಿದು
ಸ್ವಾಮಿಗೆ ನೀನು ಕೊಟ್ಟಿದ್ದೇನು?
2...
ಹೋಮ ಯಾಗ ಪೂಜೆ ಭಜನೆ
ನಾಮ ಸ್ಮರಣ ಅರ್ಚನೆ
ಇವೆಲ್ಲ ಧರ್ಮವೆಂದು
ತಿಳಿದು ಅರಿತಿದ್ದೇನು?
3...
ಅರ್ಹ ಯೋಗ್ಯ ನಾನು ಎಂದು
ಏಕೆ ನಿನಗೆ ಭ್ರಾಂತಿಯು
ಕರ್ಮಯೋಗಿಯ ಮಾತುಕೇಳು
ಕರ್ಮಕ್ಕಿಂತ ಮಿಗಿಲೇನು?
ಸ್ವಾಮಿಯೊಡನೆ ವ್ಯವಹಾರವಿದ್ದರೆ
ಕ್ಷೇತ್ರಕ್ಕೆ ಬರಬೇಡಿರಯ್ಯ
ಮರವೇ ಬರಡಾದಾಗ
ಕುಕ್ಕೆ ಇದ್ದರೂ ಫಲವೇನು?1...
ಕೆರೆಯ ನೀರನ್ನೇ ಕೆರೆಗೆ ಚೆಲ್ಲಿ
ಸಾಧಿಸಿದ್ದಾದರೂ ಎನು?
ಹರಕೆ ಹೊತ್ತು ಕರವ ಮುಗಿದು
ಸ್ವಾಮಿಗೆ ನೀನು ಕೊಟ್ಟಿದ್ದೇನು?
2...
ಹೋಮ ಯಾಗ ಪೂಜೆ ಭಜನೆ
ನಾಮ ಸ್ಮರಣ ಅರ್ಚನೆ
ಇವೆಲ್ಲ ಧರ್ಮವೆಂದು
ತಿಳಿದು ಅರಿತಿದ್ದೇನು?
3...
ಅರ್ಹ ಯೋಗ್ಯ ನಾನು ಎಂದು
ಏಕೆ ನಿನಗೆ ಭ್ರಾಂತಿಯು
ಕರ್ಮಯೋಗಿಯ ಮಾತುಕೇಳು
ಕರ್ಮಕ್ಕಿಂತ ಮಿಗಿಲೇನು?
No comments:
Post a Comment